ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಿಸರ

ಸುತ್ತಲಿಹುದು ಹಸಿರು ಕಾಡು ಜುಳುಜುಳು ಹರಿವ ಝರಿಯು ಬಣ್ಣ ಬಣ್ಣದ ಹಕ್ಕಿಯ ನೋಡು ಪರಿಸರದ ಸೊಬಗ ಸಿರಿಯು ಅಲ್ಲಿದೆ ಪರಿಮಳದ ಹೂಬನ ಅದೋ ಬಂತು ಚಿಟ್ಟೆ ನೋಡು ಅಲ್ಲಿಹುದು ಹಣ್ಣ ಮರದ ವನ ಸಿಹಿಯ ಹಣ್ಣ ಕೊಯ್ಯಲು ಓಡು ರವಿಯ ಹೊನ್ನು ಕಿರಣದಿಂದ ಕರಗುವುದು ಇಬ್ಬನಿಯ ಸಾಲು ತುಂತುರು ಮಳೆ ಹನಿಯಿಂದ ಹುಟ್ಟಿತು ಹಸಿರು ಹುಲ್ಲ ಸಾಲು ಸೊಬಗಿನ ತವರು ಈ ಪ್ರಕೃತಿ ಓಡಿಸುವುದು ಮನದ ಬೇಸರ ಮಾಡಿಡಬೇಡಿ ಎಂದೂ ವಿಕೃತಿ ಎಂದೆಂದಿಗೂ ಇರಲಿ ಸುಂದರ ವೇದಾವತಿ ಭಟ್ಟ ಮುಂಬೈ ಗೃಹಿಣಿ

ಹಿತವಚನ

ಹಿತವಚನ ಶ್ರದ್ಧೆಯಿಂದ ಕೇಳಿರಿ ಹಿರಿಯರ ಬುದ್ಧಿಮಾತು ಜಾಣರಾಗಿ ಬಾಳಿರಿ ವಿದ್ಯೆ ಬುದ್ಧಿ ಕಲಿತು ಗುರುಗಳ ಹಿತವಚನ ಬದುಕಿಗೆ ದಾರಿದೀಪ ಜನ್ಮಕೊಟ್ಟ ತಂದೆತಾಯಿ ದೇವರ ಪ್ರತಿರೂಪ ವೃದ್ಧರಲಿ ಎಳೆಯರಲಿ ಇರಲಿ ಎಂದೂ ಪ್ರೀತಿ ಎಂದೂ ಬಿಡದೆ ಬದುಕಿ ಸತ್ಯ ನ್ಯಾಯ ನೀತಿ ವೇದಾವತಿ ಭಟ್ಟ ಮುಂಬೈ ಗೃಹಿಣಿ 

ರಾಗಿ ರೊಟ್ಟಿ

ಬಡವರ ಮುಖ್ಯವಾದ ಆಹಾರವು ರಾಗಿರೊಟ್ಟಿ ಇದುವೇ ಆಗಿಹುದು ಬಹು ಸತ್ವಗಳ ಬಟ್ಟಿ ನೋಡಲು ಬಲು ಕಪ್ಪಾಗಿಹುದು ಆದರೆ ತೋಳಿಗೆ ಬಲ ತುಂಬುವುದು ಜೀವಕೆ ಪುಷ್ಠಿಯ ಕೊಡುವ ಆಹಾರ ಮಧುಮೇಹಿಗಳಿಗೆ ಇದು ಪಥ್ಯಾಹಾರ ಮೊದಲೆಲ್ಲ ತಿರುಗಿಯೂ ರಾಗಿಯ ನೋಡದವರು ಸಂಶೋಧನೆ ಫಲದಿ ಸಿರಿ ಧಾನ್ಯವೆಂದರು ಜಗಕೆ ತಿಳಿಯಲು ರಾಗಿ ಆರೋಗ್ಯದ ಸಾರವ ರೊಟ್ಟಿಯ ಸೇರಿತಾಗ ಹೋಟೆಲಿನ ಮೆನುವ ವೇದಾವತಿ ಭಟ್ಟ ಮುಂಬೈ 

ಮೃಗಾಲಯ

ಶೀರ್ಷಿಕೆ : ಮೃಗಾಲಯ ನಮ್ಮೂರಿನ ರೈಲನು ಬೇಗನೇ ಎರೋಣ ಮೈಸೂರಿನ ಮೃಗಾಲಯಕೆ ಹೋಗೋಣ ಜಿಂಕೆ, ಆನೆ, ಕರಡಿಯ ನೋಡೋಣ ಹುಲಿ, ಸಿಂಹದ ಘರ್ಜನೆ ಕೆಳೋಣ ಉದ್ದ ಕತ್ತಿನ ಜಿರಾಫೆಯ ನೋಡು ಆಫ್ರಿಕದ ದೊಡ್ಡ ಆನೆಯ ನೋಡು ಬಣ್ಣಬಣ್ಣದ ಗರಿಯ ನವಿಲಿಗಿದು ತಾಣ ಇಹುದು ಗಿಳಿ, ಕೋಗಿಲೆ, ಹಂಸ, ಕಾಜಾಣ ನೀರಲಿ ಮೀನಿನ ಆಟವು ಮಜವು ಅಬ್ಬಾ! ಮೊಸಳೆಯು ಭಯಂಕರವು ಮೈ ಜುಂ ಎನ್ನುವ ಬಗೆ ಬಗೆ ಹಾವು ಸುತ್ತಲೂ ಇಹುದು ಹಸಿರಿನ ವನವು ಮಂಗ, ಚಿಂಪಾಂಜಿ, ಕುದುರೆ, ಗೋರಿಲ್ಲಾ ಬಗೆ ಬಗೆಯ ಜೀವಿಗಳು ಇಲ್ಲೆ ಇಹುದಲ್ಲಾ ಕಸಿದಿಹೆವು ಬಂಧಿಸಿ ಇವುಗಳ ಸ್ವಾತಂತ್ರ ಪಂಜರದ ಜೀವಿಗಳಿವು ಎಂದೂ ಪರತಂತ್ರ ಮನರಂಜನೆ ಹೆಸರಲಿ ಮಾಡದಿರಿ ಶೋಷಣೆ ಆಹಾರ ನೀರು ನೀಡಿ ಮಾಡಿ ಪೋಷಣೆ ವೇದಾವತಿ ಭಟ್ಟ ಮುಂಬೈ

ಗೌರಿ ಗಣೇಶ

ಶೀರ್ಷಿಕೆ : ಗೌರಿ ತನಯನ ಜನನ ಗೌರಿಯ ತಪದ ಶಕ್ತಿಯ ಫಲವು ಇವಗೆ ಗಣೇಶನೆಂಬ ನಾಮವು ಬಂತು ಮಗನೆಂಬ ಮೋಹವು ಹಬ್ಬವು ಆಯ್ತು ಇವರ ನಾಮವು ಗೌರಿ ಸ್ನಾನಕೆ ಹೋಗಿರಲು ಗಣಪನು ಕಾವಲಿಗಿರಲು ಶಿವನು ಅಲ್ಲಿಗೆ ಬರಲು ಶಿವನ ಗಣಪನ ತಡೆಯಲು ಶಿವನು ಕೋಪದಿ ಕೆಂಪಾದ ಗಣಪನ ರುಂಡ ಚೆಂಡಾಡಿದ ರುಂಡವು ಭೂಮಿಯಲಿರಲು ಗೌರಿಯ ಸ್ನಾನವು ಮುಗಿದಿರಲು ಮಗನ ನೋಡಿ ಚೀರಾಡಿದಳು ಬದುಕಿಸೆಂದು ಗೋಳಾಡಿದಳು ಶಿವನು ಮನವು ಕರಗಿತಾಗ ಭಟರನು ಕೂಗಿ ಕರೆದನಾಗ ಪ್ರಾಣಿ ರುಂಡಕೆ ಆದೇಶಿಸಿದನು ಉತ್ತರ ದಿಕ್ಕಿಗೆ ಮಾಡಿ ತಲೆಯನು ಆನೆಯೊಂದು ಮಲಗಿರಲು ಅದರ ರುಂಡವ ಕತ್ತರಿಸಲು ಶಿವನು ಗಣಪಗೆ ಜೋಡಿಸಿದ ಕ್ಷಣದಲೆ ಗಣಪ ಜೀವ ಪಡೆದ ಗಜಮುಖದವನು ಅವನಾದ ಶಿವನು ಪಾರ್ವತಿಯ ಮಗನಾದ ವೇದಾವತಿ ಭಟ್ಟ ಮುಂಬೈ ಗೃಹಿಣಿ

ಹಲಸಿನ ಹಣ್ಣು

ಮಶೀರ್ಷಿಕೆ : ಹಲಸಿನ ಹಣ್ಣು ಪೇಟೆಯ ವಾಸದ ಮಗುವೊಂದು ಬೇಸಿಗೆ ರಜೆಯ ಕಳೆಯಲೆಂದು ಹಳ್ಳಿಯ ಅಜ್ಜಿ ಮನೆಗೆ ಬಂದಿತು ದೊಡ್ಡ ಹಲಸಿನ ಹಣ್ಣು ಕಂಡಿತು ಘಮಘಮ ಪರಿಮಳಕೆ ಸೋತು ಲಘುಬಗೆಯಲಿ ತಿನ್ನ ಬಯಸಿತು ಅಜ್ಜಿ ಬಿಡಿಸಿಟ್ಟ ತೊಳೆಯ ನೋಡಿತು ಬೇಗನೇ ಗುಳುಂ ಎಂದು ನುಂಗಿತು ಗಂಟಲಲ್ಲಿ ತೊಳೆಯು ಸಿಕ್ಕಿಕೊಂಡಿತು ಕಣ್ಣಿನಲ್ಲಿ ನೀರು ಬಳಬಳ ಹರಿಯಿತು ಅಜ್ಜಿಯಿಂದ ಎಲ್ಲವೂ ಸರಿಯಾಯಿತು ಹೊಟ್ಟೆ ತುಂಬ ಮಗು ಹಣ್ಣು ತಿಂದಿತು ವೇದಾವತಿ ಭಟ್ಟ ಮುಂಬೈ

ಪಾಪು ಮತ್ತು ಕನ್ನಡಿ

ವಿಷಯ : ಕನ್ನಡಿಯೊಳಗೆ ತನ್ನ ಬಿಂಬ ಕಂಡ ಕಂದಮ್ಮ ಶೀರ್ಷಿಕೆ : ಪಾಪು ಮತ್ತು ಕನ್ನಡಿ ನಮ್ಮಯ ಮನೆಯಲಿ ಇರುವದೊಂದು ಪಾಪು ಪಾಪುವಿನ ಮುದ್ದಾದ ಸುಂದರ ಹೆಸರು ಗೋಪು ಗುಳಿಕೆನ್ನೆಯ, ಹಾಲುನಗೆ ಗೆಜ್ಜೆನಾದದ ಪುಟಾಣಿ ಮನೆಯಲಿ ಎಲ್ಲರ ಮನಗೆದ್ದ ಕಣ್ಮಣಿ ಅಂಬೆಗಾಲಿಕ್ಕಿ ಕೋಣೆ ಸೇರಿ ನೋಡಿತು ಕನ್ನಡಿ ಮೊದಲ ಅನುಭವಕೆ ಸಂತಸವಾಯ್ತು ಇಮ್ಮಡಿ ತನ್ನ ಬಿಂಬವನೇ ನೋಡಿ ಹಾಕಿತು ಕುಣಿದು ಕೇಕೇ ಮುಟ್ಟಿ ನೋಡುವ ಸಂಭ್ರಮ ಕೇಳಬೇಕೇ!! ಬಾಲ ಭಾಷೆಯಲೇ ಶುರು ಸಂಭಾಷಣೆ ಇಣುಕಿ ನೋಡುವ ಸಂಭ್ರಮಕಿಲ್ಲ ಕೊನೆ ಕನ್ನಡಿಯು ಸೋತಿತು ಪಾಪುವನು ಕಂಡು ಹಿಗ್ಗಿ ಅಮ್ಮ ಕೊಟ್ಟಳು ಸಿಹಿಯ ತುಂಡು ವೇದಾವತಿ ಭಟ್ಟ ಮುಂಬೈ