ಗೌರಿ ಗಣೇಶ

ಶೀರ್ಷಿಕೆ : ಗೌರಿ ತನಯನ ಜನನ

ಗೌರಿಯ ತಪದ ಶಕ್ತಿಯ ಫಲವು
ಇವಗೆ ಗಣೇಶನೆಂಬ ನಾಮವು
ಬಂತು ಮಗನೆಂಬ ಮೋಹವು
ಹಬ್ಬವು ಆಯ್ತು ಇವರ ನಾಮವು

ಗೌರಿ ಸ್ನಾನಕೆ ಹೋಗಿರಲು
ಗಣಪನು ಕಾವಲಿಗಿರಲು
ಶಿವನು ಅಲ್ಲಿಗೆ ಬರಲು
ಶಿವನ ಗಣಪನ ತಡೆಯಲು

ಶಿವನು ಕೋಪದಿ ಕೆಂಪಾದ
ಗಣಪನ ರುಂಡ ಚೆಂಡಾಡಿದ
ರುಂಡವು ಭೂಮಿಯಲಿರಲು
ಗೌರಿಯ ಸ್ನಾನವು ಮುಗಿದಿರಲು

ಮಗನ ನೋಡಿ ಚೀರಾಡಿದಳು
ಬದುಕಿಸೆಂದು ಗೋಳಾಡಿದಳು
ಶಿವನು ಮನವು ಕರಗಿತಾಗ
ಭಟರನು ಕೂಗಿ ಕರೆದನಾಗ

ಪ್ರಾಣಿ ರುಂಡಕೆ ಆದೇಶಿಸಿದನು
ಉತ್ತರ ದಿಕ್ಕಿಗೆ ಮಾಡಿ ತಲೆಯನು
ಆನೆಯೊಂದು ಮಲಗಿರಲು
ಅದರ ರುಂಡವ ಕತ್ತರಿಸಲು

ಶಿವನು ಗಣಪಗೆ ಜೋಡಿಸಿದ
ಕ್ಷಣದಲೆ ಗಣಪ ಜೀವ ಪಡೆದ
ಗಜಮುಖದವನು ಅವನಾದ
ಶಿವನು ಪಾರ್ವತಿಯ ಮಗನಾದ

ವೇದಾವತಿ ಭಟ್ಟ
ಮುಂಬೈ
ಗೃಹಿಣಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಮೃಗಾಲಯ

ಪಾಪು ಮತ್ತು ಕನ್ನಡಿ