ಕಥನ ಕವನ
ಹೆತ್ತವರಿಗೆ ಹೆಗ್ಗಣ ಮುದ್ದು ನಿಸರ್ಗದ ಸಿರಿಯಲಿ ಮಲ್ಲಿಗೆ ಹಳ್ಳಿ ಒಂದೂರು ಅಲ್ಲಿತ್ತು ರಾಮಣ್ಣ-ಸೀತಮ್ಮ ಎಂಬ ದಂಪತಿಗಳ ಸೂರು ಇವರಿಗೆ ಇದ್ದ ಒಬ್ಬ ಮಗ ಇವನ ಹೆಸರು ಸಂದೀಪ ಆದರೆ ಇವನು ಬಲು ಕಪ್ಪು ಜೊತೆಯಲಿ ಕುರೂಪ ಆದರೇನು ಮಾಡುವುದು ಹೆತ್ತವರಿಗೆ ಹೆಗ್ಗಣ ಮುದ್ದು ದಂಪತಿಗಳಿಗೆ ಅವರ ಮಗ ಸಂದೀಪನೇ ಬಹಳ ಮುದ್ದು ಊರವರ ನಿಂದನೆಗೆ ಕೊಡದೆ ಕಿವಿಯ ರಾಮಣ್ಣ-ಸೀತಮ್ಮನು ಕೊಡಿಸಿದರು ಬುದ್ಧಿವಂತನಾದ ಮಗನಿಗೆ ಉನ್ನತ ಶಿಕ್ಷಣವನು ಪಡೆದನು ಬಹು ದೊಡ್ಡ ಸಂಬಳದ ಕೆಲಸವನು ತಂದೆ-ತಾಯಿಗೆ ಬಹಳ ಕೀರ್ತಿಯನು ತಂದನು