ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಥನ ಕವನ

ಹೆತ್ತವರಿಗೆ ಹೆಗ್ಗಣ ಮುದ್ದು ನಿಸರ್ಗದ ಸಿರಿಯಲಿ ಮಲ್ಲಿಗೆ ಹಳ್ಳಿ ಒಂದೂರು ಅಲ್ಲಿತ್ತು ರಾಮಣ್ಣ-ಸೀತಮ್ಮ ಎಂಬ ದಂಪತಿಗಳ ಸೂರು ಇವರಿಗೆ ಇದ್ದ ಒಬ್ಬ ಮಗ ಇವನ ಹೆಸರು ಸಂದೀಪ ಆದರೆ ಇವನು ಬಲು ಕಪ್ಪು ಜೊತೆಯಲಿ ಕುರೂಪ ಆದರೇನು ಮಾಡುವುದು ಹೆತ್ತವರಿಗೆ ಹೆಗ್ಗಣ ಮುದ್ದು ದಂಪತಿಗಳಿಗೆ ಅವರ ಮಗ ಸಂದೀಪನೇ ಬಹಳ ಮುದ್ದು ಊರವರ ನಿಂದನೆಗೆ ಕೊಡದೆ ಕಿವಿಯ ರಾಮಣ್ಣ-ಸೀತಮ್ಮನು ಕೊಡಿಸಿದರು ಬುದ್ಧಿವಂತನಾದ ಮಗನಿಗೆ ಉನ್ನತ ಶಿಕ್ಷಣವನು ಪಡೆದನು ಬಹು ದೊಡ್ಡ ಸಂಬಳದ ಕೆಲಸವನು ತಂದೆ-ತಾಯಿಗೆ ಬಹಳ ಕೀರ್ತಿಯನು ತಂದನು

ನಮ್ಮೂರ ಜಾತ್ರೆ

ನಮ್ಮೂರ ಜಾತ್ರೆ ಬಲು ಜೋರು ಎಳೆಯುವ ಬನ್ನಿ ದೇವರ ತೇರು ಇಲ್ಲಿ ಅಂಗಡಿಗಳದೇ ಕಾರುಬಾರು ಅದರಲಿ ತಿನಿಸುಗಳು ಹಲವಾರು ಬಂದಿದೆ ಜಾತ್ರೆಗೆ ತಿರುಗುವ ತೊಟ್ಟಿಲು ಹತ್ತಿದರೆ ಭಾಸ ಮುಟ್ಟಿದಂತೆ ಮುಗಿಲು ಪಕ್ಕದಲ್ಲೇ ಇಹುದು ಓಡುವ ರೈಲು ತಿನ್ನುತಲಿ ಏರುವ ಮಸಾಲೆ ಭೇಲು ಬಣ್ಣ ಬಣ್ಣದ ಬಳೆಯ ಅಂಗಡಿಯು ಅಲ್ಲಿಯೆ ಇಹುದು ಕಿವಿಯೋಲೆಯು ಬಿಂದಿ, ಉಗುರಿನ ಬಣ್ಣ, ಕಾಡಿಗೆಯು ಇಹುದಿಲ್ಲಿ ನೋಡು ಬಗೆ ಬಗೆಯು ಚಾಕಲೇಟ್, ಬಿಸ್ಕತಗಳಿಗಿಲ್ಲ ಬರವು ಇರಲಿ ಐಸ್ ಕ್ರೀಮ್, ತಂಪಾದ ಪೇಯವು ಸವಿಯಲು ಬೇಕು ಮೈಸೂರು ಪಾಕವು ಬಂದೇ ಬಿಟ್ಟಿತು ಊಟದ ಸಮಯವು ಆಡಲು ಬೇಕು ಬಗೆ ಬಗೆಯ ಆಟಿಕೆ ದೊಡ್ಡ ವಿಮಾನನು ಕೊಳ್ಳುವ ಬಯಕೆ ಕಾಸಿಲ್ಲದಿದ್ದರೆ ಏನಿಲ್ಲವೂ ಜೋಕೆ ನಮ್ಮೂರಿನ ಜಾತ್ರೆಗೆ ಇಲ್ಲವು ಹೋಲಿಕೆ